ಸಚಿನ್‌ ಪೈಲೆಟ್‌ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ರಾಯ್ಪುರ್:‌ ಬಿಜೆಪಿಯ ಹಿರಿಯ ನಾಯಕರು ಬಳಸುತ್ತಿರುವ ಭಾಷೆಯನ್ನು ನೋಡಿದರೆ ಅವರು ತಮ್ಮ ಗುರಿಯನ್ನು ತಲುಪುವಲ್ಲಿ ಸೋಲುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲೆಟ್‌ ಹೇಳಿದರು.

ʼಉತ್ತರ ಹಾಗು ದಕ್ಷಿಣದಲ್ಲಿ ಇಂಡಿಯಾ ಮೈತ್ರಿಕೂಟ ಉತ್ತಮ ಪ್ರದರ್ಶನ ತೋರುತ್ತಿದೆ. ಜೂ.೪ರಂದು ಮೈತ್ರಿಕೂಟ ಸರ್ಕಾರ ರಚಿಸಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲಾ ಸಂಸ್ಥೆಗಳು ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ತನಿಖೆಗಳು ದ್ವೇಷದ ಉದ್ದೇಶದಿಂದ ನಡೆಯಬಾರದುʼ ಎಂದರು.

ಕಾಂಗ್ರೆಸ್‌ ಪಕ್ಷ ಎಮ್.ಎಸ್.ಪಿ, ಮನ್ರೇಗಾ, ಮಹಿಳಾ ಸಶಕ್ತಿಕರಣದಂತಹ ವಿಚಾರಗಳ ಕುರಿತು ಮಾತಾಡುತ್ತಿದ್ದರೆ, ಬಿಜೆಪಿ ಮಾತ್ರ ಮಂದಿರ, ಮಸೀದಿ, ಮಂಗಳಸೂತ್ರ, ಹಿಂದು, ಮುಸ್ಲಿಂ ಇತ್ಯಾದಿ ವಿವಾದಿತ ವಿಷಯಗಳ ಬಗ್ಗೆ ಮಾತಾಡುತ್ತಿದೆ ಎಂದರು.

ಛತ್ತೀಸಘಡಕ್ಕೆ ಏ.೨೯ರಂದು ರಾಹುಲ್‌ ಗಾಂಧಿ ಬೇಟಿ ನೀಡಲಿದ್ದು, ಏ.೩೦ರಂದು ಮಲ್ಲಿಕಾರ್ಜುನ ಖರ್ಗೆ ಬರಲಿದ್ದಾರೆ. ಮೇ.೨ರಂದು ಪ್ರಯಾಂಕಾ ಗಾಂಧಿ ಕೂಡ ಪ್ರಚಾರದ ಭಾಗವಾಗಿ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

Font Awesome Icons

Leave a Reply

Your email address will not be published. Required fields are marked *